ಹಣವನ್ನು ಪಾವತಿಮಾಡಬೇಕೆಂಬುದಾಗಿ ತಿಳಿಸುವ ನಿರ್ಣಯದ ತಿಳಿವಳಿಕೆಯನ್ನು ಷೇರುದಾರನಿಗೆ ಕೊಟ್ಟಾಗ ಆತ ಕಂಪೆನಿಗೆ ಸಂದಾಯ ಮಾಡಬೇಕಾದ ಹಣದ ಮೊತ್ತ (ಕಾಲ್ ಮನಿ). ಕೂಡುಬಂಡವಾಳ ಕಂಪನಿಯ ಷೇರುದಾರ ತನ್ನ ಆವೇದನ ಪತ್ರದ ಜೊತೆಯಲ್ಲಿಯೇ ತಾನು ಪಡೆಯುವ ಷೇರಿನ ಪೂರ್ತಿ ಹಣವನ್ನು ಕೊಡಬೇಕಾದ ಅಗತ್ಯವಿಲ್ಲ. ಈ ಹಣವನ್ನು ಹಲವು ಕಂತುಗಳಲ್ಲಿ-ಎಂದರೆ ಆವೇದನ ಪತ್ರ ಸಲ್ಲಿಸುವಾಗ, ಷೇರುಗಳನ್ನು ಹಂಚಿದಾಗ ಮತ್ತು ಹಣ ಬೇಕೆಂದು ಕಂಪೆನಿ ಕರೆ ನೀಡಿದಾಗ-ಹೀಗೆ ಕ್ರಮವಾಗಿ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಆಹ್ವಾನಿತಧನವೆನ್ನುವುದು ಷೇರು ಮೌಲ್ಯದ ಒಂದು ಭಾಗ. ಈ ಧನವನ್ನು ಷೇರುದಾರ ಒಂದು ನಿಯಮಿತ ಅವಧಿಯಲ್ಲಿ ಪಾವತಿ ಮಾಡಬೇಕು. ಇಲ್ಲದಿದ್ದರೆ ಅಂಥವನ ಷೇರು ಅಥವಾ ಷೇರುಗಳನ್ನು ಮುಟ್ಟುಗೋಲುಹಾಕಿಕೊಳ್ಳಲು ಕಂಪೆನಿಗೆ ಅಧಿಕಾರವಿರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ